ರೈತ ದೇಶದ ಬೆನ್ನೆಲುಬು. ಆತ ಬೆವರು ಸುರಿಸಿ ದುಡಿದರೆ ಮಾತ್ರ ನಾವು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ಆದರೆ ರೈತನ ಜೀವನದ ಜತೆಗೆ ಮಳೆಯೂ ಆಟವಾಡುತ್ತದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ಮಳೆ ಬಂದು ತಾನು ಬೆಳೆದ ಬೆಳೆಯೆಲ್ಲಾ ಹಾಳಾಗಿದ್ರೂ ರೈತನ ಮುಖದಲ್ಲಿ ನಗು ಮಾತ್ರ ಮಾಸಿಲ್ಲ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭೂಮಿ ತಾಯಿಯನ್ನೇ ನಂಬಿ ಬದುಕುತ್ತಿರುವ ರೈತನ (farmer) ಕೃಷಿ ಕಾಯಕದ ಜತೆಗೆ ಈ ಮಳೆಯೂ ಆಟವಾಡುತ್ತದೆ. ಮಳೆ ಬಾರದೆ ಬರಗಾಲದಿಂದ ಬೆಳೆಯೆಲ್ಲಾ ನಾಶವಾದರೆ, ಇನ್ನು ಕೆಲವೊಮ್ಮೆ ಅತಿಯಾದ ಮಳೆಯಿಂದ ಬೆಳೆಯೆಲ್ಲಾ ಕೊಚ್ಚಿ ಹೋಗುತ್ತದೆ. ಇಂತಹ ದೃಶ್ಯಗಳನ್ನು ನೋಡಿದಾಗ ಎಂತಹವರಿಗಾದ್ರು ಕರುಳು ಚುರ್ ಎನ್ನುತ್ತೆ. ರೈತರ ಕಷ್ಟ ಎಷ್ಟು ಎನ್ನುವ ವಿಡಿಯೋ ವೈರಲ್ ಆಗಿದೆ. ಹೌದು, ಭತ್ತದ ಕಟಾವಿಗೆ ಮಳೆ ಅಡ್ಡಿ ತಂದಿದ್ದು, ಮಳೆಯ ನಡುವೆಯೂ ರೈತರು ತಾನು ಬೆಳೆದ ಬೆಳೆಯನ್ನು ಮನೆಯ ಅಂಗಳಕ್ಕೆ ತಂದು ಇಷ್ಟು ಸಿಕ್ಕಿದ್ದು ಪುಣ್ಯ ಎನ್ನುವಂತೆ ಪೈರಿನಿಂದ ಭತ್ತವನ್ನು ಬೇರ್ಪಡಿಸುವ ದೃಶ್ಯವು ಕರುಳು ಹಿಂಡುವಂತಿದೆ. ಈ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.
ಮಳೆ ತಂದ ಸಂಕಷ್ಟ: ರೈತನ ಪಾಡು ಹೇಗಿದೆ ನೋಡಿ
gowrishkothari ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರೈತನ ಬದುಕಿನ ಸ್ಪಷ್ಟ ಚಿತ್ರಣ ಇಲ್ಲಿದೆ. ಮಳೆಯಿಂದ ಹಾಳಾದ ಬೆಳೆಯನ್ನು ಮನೆಯ ಅಂಗಳಕ್ಕೆ ತರುವುದನ್ನು ಕಾಣಬಹುದು. ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದ ಬೆಳೆಯೂ ಹಾಳಾಗಿದ್ರೂ ಕೂಡ ಈ ರೈತರ ಮುಖದಲ್ಲಿ ಮಾತ್ರ ನಗು ಮಾಸದಿರುವುದನ್ನು ಕಾಣಬಹುದು. ಮನೆಯ ಅಂಗಳದಲ್ಲಿ ಭತ್ತವನ್ನು ಪೈರಿನಿಂದ ಬೇರ್ಪಡಿಸುತ್ತಿರುವ ಕೆಲಸದಲ್ಲಿ ರೈತರು ತೊಡಗಿಕೊಂಡಿದ್ದಾರೆ. ಆದರೆ, ಜೋರಾಗಿ ಸುರಿಯುತ್ತಿರುವ ಮಳೆಗೆ ಭತ್ತವೆಲ್ಲಾ ಒದ್ದೆಯಾಗಿ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಈ ಭತ್ತವನ್ನು ನೀರಿನಿಂದ ಬೇರ್ಪಡಿಸಿ ಬುಟ್ಟಿಯಲ್ಲಿ ತುಂಬಿಸಿರುತ್ತಿರುವುದನ್ನು ಕಾಣಬಹುದು.
Have any thoughts?
Share your reaction or leave a quick response — we’d love to hear what you think!