ದೆಹಲಿಯಲ್ಲಿ ನಿಗೂಢ ಸ್ಫೋಟ(Blast) ಸಂಭವಿಸಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ಕಾರಣವಾಗಿದ್ದ ಕಾರು ದೆಹಲಿಗೆ ಬರುವ ಮೊದಲು 12 ದಿನಗಳ ಕಾಲ ಫರಿದಾಬಾದ್ನ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿತ್ತು ಎನ್ನುವ ವಿಚಾರ ತಿಳಿದುಬಂದಿದೆ. ಶಂಕಿತ ಆತ್ಮಹತ್ಯಾ ಬಾಂಬರ್ ಡಾ. ಉಮರ್ ನಬಿ ನವೆಂಬರ್ 10 ರಂದು ದಾಳಿ ನಡೆಯುವ ದಿನ ಬೆಳಗ್ಗೆ ಕಾಲೇಜು ಕ್ಯಾಂಪಸ್ನಿಂದ ಕಾರನ್ನು ಹೊರಗೆ ತೆಗೆದುಕೊಂಡು ಹೋಗಿದ್ದ ಎಂದು ಹೇಳಲಾಗಿದೆ.

ನವದೆಹಲಿ, ನವೆಂಬರ್ 12: ದೆಹಲಿಯಲ್ಲಿ ನಿಗೂಢ ಸ್ಫೋಟ(Blast) ಸಂಭವಿಸಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ಕಾರಣವಾಗಿದ್ದ ಕಾರು ದೆಹಲಿಗೆ ಬರುವ ಮೊದಲು 12 ದಿನಗಳ ಕಾಲ ಫರಿದಾಬಾದ್ನ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿತ್ತು ಎನ್ನುವ ವಿಚಾರ ತಿಳಿದುಬಂದಿದೆ. ಶಂಕಿತ ಆತ್ಮಹತ್ಯಾ ಬಾಂಬರ್ ಡಾ. ಉಮರ್ ನಬಿ ನವೆಂಬರ್ 10 ರಂದು ದಾಳಿ ನಡೆಯುವ ದಿನ ಬೆಳಗ್ಗೆ ಕಾಲೇಜು ಕ್ಯಾಂಪಸ್ನಿಂದ ಕಾರನ್ನು ಹೊರಗೆ ತೆಗೆದುಕೊಂಡು ಹೋಗಿದ್ದ ಎಂದು ಹೇಳಲಾಗಿದೆ.
ಸೋಮವಾರ ಸಂಜೆ 6.52 ರ ಸುಮಾರಿಗೆ ಹಳೆ ದೆಹಲಿ ಪ್ರದೇಶದಲ್ಲಿ ಪ್ರಬಲ ಸ್ಫೋಟ ಸಂಭವಿಸಿತು. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿಯ ಸಂಚಾರ ನಿಲ್ದಾಣದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ ಐ20 ಕಾರು ಸ್ಫೋಟಗೊಂಡಿತ್ತು. ಈ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು ಮತ್ತು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಡಾ. ಉಮರ್ ನಬಿ ಅವರು ಅಕ್ಟೋಬರ್ 29 ರಂದು ಫರಿದಾಬಾದ್ನ ಕಾರು ವ್ಯಾಪಾರಿ ಸೋನು ಅವರಿಂದ ಕಾರನ್ನು ಖರೀದಿಸಿದ್ದ ಮತ್ತು ಅದೇ ದಿನ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಕ್ಕಾಗಿ ಕಾರನ್ನು ಹೊರತೆಗೆದಿದ್ದ. ಅಲ್ಲಿಂದ ನಬಿ ಕಾರನ್ನು ಅಲ್-ಫಲಾಹ್ ವೈದ್ಯಕೀಯ ಕಾಲೇಜಿಗೆ ತೆಗೆದುಕೊಂಡು ಹೋಗಿ ಡಾ. ಮುಜಮ್ಮಿಲ್ ಶಕೀಲ್ ಅವರ ಸ್ವಿಫ್ಟ್ ಡಿಜೈರ್ ಕಾರಿನ ಪಕ್ಕದಲ್ಲಿ ನಿಲ್ಲಿಸಿದ್ದ. ಸೋಮವಾರ ಭಾರೀ ಪ್ರಮಾಣದ ಸ್ಫೋಟಕಗಳ ಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಡಾ. ಶಕೀಲ್ ಅವರ ಕಾರನ್ನು ಡಾ. ಶಾಹೀನ್ ಸಯೀದ್ ಹೆಸರಿನಲ್ಲಿ ನೋಂದಾಯಿಸಲಾಗಿದ್ದು , ಅವರ ಕಾರಿನಿಂದ ಅಸಾಲ್ಟ್ ರೈಫಲ್ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ಟೋಬರ್ 29 ರಿಂದ ನವೆಂಬರ್ 10 ರವರೆಗೆ ಕಾರನ್ನು ಅಲ್ಲಿಯೇ ನಿಲ್ಲಿಸಲಾಗಿತ್ತು ಎಂದು ವರದಿಯಾಗಿದೆ, ಆದರೆ ನಬಿ ಅವರ ಆಪ್ತ ಸಹಾಯಕರಾದ ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಅದೀಲ್ ಅಹ್ಮದ್ ರಾಥರ್ ಅವರನ್ನು ಬಂಧಿಸಿದ ನಂತರ ಅವರು ಭಯಭೀತರಾಗಿದ್ದರು.
ಅಕ್ಟೋಬರ್ 29 ರಿಂದ ನವೆಂಬರ್ 10 ರವರೆಗೆ ಕಾರನ್ನು ಅಲ್ಲಿಯೇ ನಿಲ್ಲಿಸಲಾಗಿತ್ತು ಎಂದು ವರದಿಯಾಗಿದೆ, ಆದರೆ ನಬಿ ಅವರ ಆಪ್ತ ಸಹಾಯಕರಾದ ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಅದೀಲ್ ಅಹ್ಮದ್ ರಾಥರ್ ಅವರನ್ನು ಬಂಧಿಸಿದ ನಂತರ ಅವರು ಭಯಭೀತರಾಗಿದ್ದರು.
ನಂತರ ವಾಹನವನ್ನು ಕನ್ನಾಟ್ ಪ್ಲೇಸ್ ಮತ್ತು ಮಯೂರ್ ವಿಹಾರ್ನಲ್ಲಿ ಪತ್ತೆ ಹಚ್ಚಿ, ನಂತರ ಚಾಂದನಿ ಚೌಕ್ನಲ್ಲಿರುವ ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಸಿಸಿ ಕ್ಯಾಮರಾದಲ್ಲಿ ಮಧ್ಯಾಹ್ನ 3.19 ಕ್ಕೆ ಕಾರು ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಶಂಕಿತ ಆತ್ಮಹತ್ಯಾ ಬಾಂಬರ್ನ ಕೈ ಕಿಟಕಿಯ ಮೇಲೆ ಇತ್ತು. ಸಂಜೆ 6.30 ರವರೆಗೆ ವಾಹನ ಪಾರ್ಕಿಂಗ್ ಸ್ಥಳದಿಂದ ಹೊರಬರಲಿಲ್ಲ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಹರಿಯಾಣ ಪೊಲೀಸರು ಸೋಮವಾರ ಬೆಳಗ್ಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಡಾ. ಉಮರ್ ನಬಿಯವರ ಆಪ್ತ ಸಹಾಯಕ ಡಾ. ಮುಜಮ್ಮಿಲ್ ಶಕೀಲ್, ಡಾ. ಅದೀಲ್ ಅಹ್ಮದ್ ರಾಥರ್ನನ್ನು ಬಂಧಿಸಲಾಯಿತು. ಪೊಲೀಸರು 2,900 ಕೆಜಿ ಸ್ಫೋಟಕಗಳು ಮತ್ತು ಅಸಾಲ್ಟ್ ರೈಫಲ್ಗಳು ಮತ್ತು ಪಿಸ್ತೂಲ್ಗಳಂತಹ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದ್ದರು. ಸ್ಫೋಟಕವನ್ನು ಸ್ಥಳಾಂತರಿಸುವ ಅಥವಾ ವಿಲೇವಾರಿ ಮಾಡುವ ಪ್ರಯತ್ನದಲ್ಲಿ, ಸಾಧನವು ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ.
Have any thoughts?
Share your reaction or leave a quick response — we’d love to hear what you think!